ವಿಶ್ವ ಬ್ಯಾಂಕ್ ನೆರವಿನ ಹೆಚ್ಚುವರಿ ಅನುದಾನದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯು ಜಲ ನಿರ್ಮಲ ಯೋಜನೆಯಡಿ ನಿರ್ಮಿಸಿದ ಕೆರೆಯಿಂದ ಶುದ್ಧೀಕರಿಸದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲಲ್ಲಿ ಪೈಪ್ಗಳು ಒಡೆದಿದ್ದು ತಗ್ಗುಗಳಲ್ಲಿ ಜಾನುವಾರುಗಳು ಮಲಗುತ್ತವೆ. ಹೀಗಾಗಿ ಮಣ್ಣು ಮಿಶ್ರಿತ ಕಲುಷಿತ ನೀರು ಪೂರೈಕೆಯಾಗುತ್ತಿದೆ.ತೋರಣದಿನ್ನಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರಣದಿನ್ನಿ ಕ್ರಾಸ್, ಗೂಗೆಬಾಳ, ಮಲ್ಕಾಪುರ, ನಾಗಪ್ಪ ಕ್ಯಾಂಪ್, ತಾಯಮ್ಮ ಕ್ಯಾಂಪ್, ಚಿಕ್ಕದಿನ್ನಿ ಮತ್ತು ಬಸಾಪುರ ಸೇರಿದಂತೆ ಎಂಟು ಗ್ರಾಮಗಳಿಗೆ ಇದೇ ಕೆರೆಯಿಂದ ನೀರು ಪೂರೈಕೆಯಾಗುತ್ತಿದೆ.