<p>ರಾಯಚೂರು: ‘ದೌರ್ಜನ್ಯ, ಅತ್ಯಾಚಾರ, ಶೋಷಣೆ, ಮಾನಸಿಕ ಹಿಂಸೆಯಂತಹ ಹಲವು ಬಗೆಯ ಸಂಕಷ್ಟಗಳಿಗೆ ದೇಶದ ಮಹಿಳೆಯರು ಒಳಗಾಗುತ್ತಿರುವುದು ಕಳವಳಕಾರಿ ಸಂಗತಿ’ ಎಂದು ಲೇಖಕಿ ವಿನಯಾ ಒಕ್ಕುಂದ ಹೇಳಿದರು.</p>.<p>ನಗರದ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಶನ್ ಸಂಸ್ಥೆಯ ಎಎಂಇ ದಂತ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಲಿಂಗ ಸೂಕ್ಷ್ಮತೆಯ ಅರಿವು ಮತ್ತು ವ್ಯಕ್ತಿತ್ವ ನಿರ್ಮಾಣ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಲಿಂಗ ರಾಜಕಾರಣದಿಂದಾಗಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಒಲೆ ಬದಲಾಗಿದ್ದರೂ ಉರಿ ಬದಲಾಗಿಲ್ಲ ಎನ್ನುವಂತಹ ಬಿಕ್ಕಟ್ಟಿನ ಪರಿಸ್ಥಿತಿ ಇಂದಿನ ಆಧುನಿಕ ಮಹಿಳೆಯರದ್ದಾಗಿದೆ’ ಎಂದು ಹೇಳಿದರು.</p>.<p>‘ಹೆಣ್ಣಾಗಿ ಜಗತ್ತನ್ನು ನೋಡುವ ಕ್ರಮವನ್ನು ಗಂಡು ಮತ್ತು ಗಂಡಾಗಿ ನೋಡುವ ಮನೋಧರ್ಮವನ್ನು ಹೆಣ್ಣು ರೂಪಿಸಿಕೊಳ್ಳಬೇಕಾಗಿರುವುದು ಆರೋಗ್ಯಕರ ಸಮಾಜದ ದೊಡ್ಡ ಲಕ್ಷಣ’ ಎಂದು ತಿಳಿಸಿದರು.</p>.<p>ಲೇಖಕ ದಸ್ತಗೀರಸಾಬ್ ದಿನ್ನಿ ಮಾತನಾಡಿ, ‘ವರ್ತಮಾನದ ಮಹಿಳೆ ಕೌಟುಂಬಿಕ ಅಸುರಕ್ಷತೆ, ಆರ್ಥಿಕ ಅಸಹಾಯಕತೆಯಿಂದಾಗಿ ಎಲ್ಲವನ್ನೂ ಮೂಕವಾಗಿ ಅನುಭವಿಸುತ್ತಲೇ ಮತ್ತೆ ಮತ್ತೆ ಅವಮಾನದ ಕೆಂಡವನ್ನು ಹಾಯುತ್ತಿದ್ದಾಳೆ. ವಿನಯಾ ಅವರ ಮಾತುಗಳಲ್ಲಿ ಹೊಸ ಆಲೋಚನಾಕ್ರಮ, ಮನುಷ್ಯ ಪ್ರೇಮ, ಮಾನವೀಯ ಧೋರಣೆ ವ್ಯಕ್ತವಾಗಿದೆ’ ಎಂದು ಹೇಳೀದರು.</p>.<p>ಸಂಸ್ಥೆಯ ಖಜಾಂಚಿ ಭೀಮನಗೌಡ ಇಟಗಿ ಮಾತನಾಡಿ, ‘ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ, ಆಪ್ತ ತಿಳಿವಳಿಕೆ, ವೈಚಾರಿಕ ಪ್ರಜ್ಞೆ, ಸಮಾಜವನ್ನು ನೋಡುವ ಹೊಸ ಕಣ್ಣೋಟವನ್ನು ಕೊಡುತ್ತವೆ’ ಎಂದು ಅಭಿಪ್ರಾಯಪಟ್ಟರು.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದರೂರು ಬಸವರಾಜ ಪಾಟೀಲ ಮಾತನಾಡಿ, ‘ಯುವಸಮುದಾಯ ಬದುಕು, ಸಮಾಜವನ್ನು ಪ್ರೀತಿಸಬೇಕು. ಉತ್ತಮ ಸಂವೇದನೆಯನ್ನು ಬೆಳೆಸಿಕೊಂಡು ಸಮಾನತೆಯ ಸಮಾಜಕ್ಕಾಗಿ ಮಿಡಿಯಬೇಕು’ ಎಂದರು.</p>.<p>ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಕೆ.ವೆಂಕಟೇಶ್, ಪ್ರಾಚಾರ್ಯ ಶಿವಾನಂದ ಆಸ್ಪಲ್ಲಿ, ಪ್ರಾಧ್ಯಾಪಕ ರಾಘವೇಂದ್ರ ಹವಳೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತಿಥಿಗಳೊಂದಿಗೆ ಸಂವಾದ ನಡೆಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-32-1139366946</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ‘ದೌರ್ಜನ್ಯ, ಅತ್ಯಾಚಾರ, ಶೋಷಣೆ, ಮಾನಸಿಕ ಹಿಂಸೆಯಂತಹ ಹಲವು ಬಗೆಯ ಸಂಕಷ್ಟಗಳಿಗೆ ದೇಶದ ಮಹಿಳೆಯರು ಒಳಗಾಗುತ್ತಿರುವುದು ಕಳವಳಕಾರಿ ಸಂಗತಿ’ ಎಂದು ಲೇಖಕಿ ವಿನಯಾ ಒಕ್ಕುಂದ ಹೇಳಿದರು.</p>.<p>ನಗರದ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಶನ್ ಸಂಸ್ಥೆಯ ಎಎಂಇ ದಂತ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಲಿಂಗ ಸೂಕ್ಷ್ಮತೆಯ ಅರಿವು ಮತ್ತು ವ್ಯಕ್ತಿತ್ವ ನಿರ್ಮಾಣ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಲಿಂಗ ರಾಜಕಾರಣದಿಂದಾಗಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಒಲೆ ಬದಲಾಗಿದ್ದರೂ ಉರಿ ಬದಲಾಗಿಲ್ಲ ಎನ್ನುವಂತಹ ಬಿಕ್ಕಟ್ಟಿನ ಪರಿಸ್ಥಿತಿ ಇಂದಿನ ಆಧುನಿಕ ಮಹಿಳೆಯರದ್ದಾಗಿದೆ’ ಎಂದು ಹೇಳಿದರು.</p>.<p>‘ಹೆಣ್ಣಾಗಿ ಜಗತ್ತನ್ನು ನೋಡುವ ಕ್ರಮವನ್ನು ಗಂಡು ಮತ್ತು ಗಂಡಾಗಿ ನೋಡುವ ಮನೋಧರ್ಮವನ್ನು ಹೆಣ್ಣು ರೂಪಿಸಿಕೊಳ್ಳಬೇಕಾಗಿರುವುದು ಆರೋಗ್ಯಕರ ಸಮಾಜದ ದೊಡ್ಡ ಲಕ್ಷಣ’ ಎಂದು ತಿಳಿಸಿದರು.</p>.<p>ಲೇಖಕ ದಸ್ತಗೀರಸಾಬ್ ದಿನ್ನಿ ಮಾತನಾಡಿ, ‘ವರ್ತಮಾನದ ಮಹಿಳೆ ಕೌಟುಂಬಿಕ ಅಸುರಕ್ಷತೆ, ಆರ್ಥಿಕ ಅಸಹಾಯಕತೆಯಿಂದಾಗಿ ಎಲ್ಲವನ್ನೂ ಮೂಕವಾಗಿ ಅನುಭವಿಸುತ್ತಲೇ ಮತ್ತೆ ಮತ್ತೆ ಅವಮಾನದ ಕೆಂಡವನ್ನು ಹಾಯುತ್ತಿದ್ದಾಳೆ. ವಿನಯಾ ಅವರ ಮಾತುಗಳಲ್ಲಿ ಹೊಸ ಆಲೋಚನಾಕ್ರಮ, ಮನುಷ್ಯ ಪ್ರೇಮ, ಮಾನವೀಯ ಧೋರಣೆ ವ್ಯಕ್ತವಾಗಿದೆ’ ಎಂದು ಹೇಳೀದರು.</p>.<p>ಸಂಸ್ಥೆಯ ಖಜಾಂಚಿ ಭೀಮನಗೌಡ ಇಟಗಿ ಮಾತನಾಡಿ, ‘ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ, ಆಪ್ತ ತಿಳಿವಳಿಕೆ, ವೈಚಾರಿಕ ಪ್ರಜ್ಞೆ, ಸಮಾಜವನ್ನು ನೋಡುವ ಹೊಸ ಕಣ್ಣೋಟವನ್ನು ಕೊಡುತ್ತವೆ’ ಎಂದು ಅಭಿಪ್ರಾಯಪಟ್ಟರು.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದರೂರು ಬಸವರಾಜ ಪಾಟೀಲ ಮಾತನಾಡಿ, ‘ಯುವಸಮುದಾಯ ಬದುಕು, ಸಮಾಜವನ್ನು ಪ್ರೀತಿಸಬೇಕು. ಉತ್ತಮ ಸಂವೇದನೆಯನ್ನು ಬೆಳೆಸಿಕೊಂಡು ಸಮಾನತೆಯ ಸಮಾಜಕ್ಕಾಗಿ ಮಿಡಿಯಬೇಕು’ ಎಂದರು.</p>.<p>ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಕೆ.ವೆಂಕಟೇಶ್, ಪ್ರಾಚಾರ್ಯ ಶಿವಾನಂದ ಆಸ್ಪಲ್ಲಿ, ಪ್ರಾಧ್ಯಾಪಕ ರಾಘವೇಂದ್ರ ಹವಳೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತಿಥಿಗಳೊಂದಿಗೆ ಸಂವಾದ ನಡೆಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-32-1139366946</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>