ಈ ಹಿಂದೆ ರೈತ ಭವನದಲ್ಲಿ ಕೆಲ ವರ್ಷ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಾಗಿತ್ತು. ತದ ನಂತರ ಸುಮಾರು 10 ವರ್ಷ ಸಂಚಾರ ಪೊಲೀಸ್ ಠಾಣೆಗೆ ಬಳಸಲಾಯಿತು. ಈಗ ಖಾಲಿ ಇದ್ದು, ನೋಡಲು ಭೂತ ಬಂಗಲೆಯಂತೆ ಕಾಣುತ್ತಿದೆ. ರೈತರು ತಾವು ಬೆಳೆದ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದ ಸಮಯದಲ್ಲಿ ವಿಶ್ರಾಂತಿ ಪಡೆಯಲಿ ಎನ್ನುವ ಉದ್ದೇಶದಿಂದ ಕಟ್ಟಲಾಗಿರುವ ರೈತ ಭವನ ನಿರುಪಯುಕ್ತವಾಗಿರುವುದನ್ನು ಗಮನಿಸಿದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲದಿರುವುದು ತಿಳಿಯುತ್ತದೆ ಎನ್ನುವುದು ರೈತರ ಆರೋಪ.