ರಂಗಭೂಮಿ ಕಲಾವಿದರಾಗಿದ್ದ ತಂದೆಯಿಂದ ಪ್ರಭಾವಿತರಾಗಿ ಚಿಕ್ಕಂದಿನಲ್ಲೆ ತತ್ವಪದ ಗಾಯನ ಆರಂಭಿಸಿದ್ದಾರೆ. ಮಠಮಾನ್ಯಗಳಲ್ಲಿ ಅಧ್ಯಯನ ಮಾಡಿರುವುದರಿಂದ ಆಧ್ಯಾತ್ಮದ ಸೆಳೆತಕ್ಕೊಳಗಾಗಿದ್ದಾರೆ. ಜಾನಪದ ಗಾಯನದಲ್ಲಿಯೆ ಬದುಕು ಕಟ್ಟಿಕೊಂಡಿದ್ದಾರೆ. ವಚನ ಸಾಹಿತ್ಯ, ದಾಸಸಾಹಿತ್ಯ, ತತ್ವಪದಗಳು ಸೇರಿದಂತೆ ಮಾನವೀಯ ನೆಲೆ, ಜೀವಪರವಾಗಿ ಮೂಡಿ ಬಂದಿರುವ ಎಲ್ಲ ರೀತಿ ಸಾಹಿತ್ಯಕ್ಕೆ ತಮ್ಮ ಕಂಠವನ್ನು ಬಳಸಿ ಅದನ್ನು ಜನಸಾಮಾನ್ಯರಿಗೆ ತಲುಪಿಸುವ ಕಾಯಕದಲ್ಲಿ ಉಸ್ಮಾನಖಾನ್ ತೊಡಗಿಸಿಕೊಂಡಿದ್ದಾರೆ.