ಇದನ್ನು ಗುರುನಾಥಗೌಡ ಗೌಡರ ಸೇರಿದಂತೆ ಇತರ ಐವರೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು 669 ಜನ ಲೈಕ್ ಮಾಡಿದ್ದಾರೆ. 147 ಕಮೆಂಟ್ಗಳು ಬಂದಿವೆ. ಈ ಪೋಸ್ಟ್ಗೆ ಪ್ರತಿಯಾಗಿ ಮೈಲಾರ ಪಾಟೀಲ ಎಂಬುವವರು ಆನಂದ ಬೆಳಗಲಿ ಹಾಗೂ ಇತರ 30 ಜನರೊಂದಿಗೆ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅಮೃತ ದೇಸಾಯಿ ಕೈಮುಗಿದಿರುವ ಚಿತ್ರಕ್ಕೆ, ‘ನಮ್ಮ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಹರಿಹಾರನಾದ ಸನ್ಮಾನ್ಯ ವಿನಯ ಕುಲಕರ್ಣಿ ಅವರಿಗೆ ಮತ್ತೊಮ್ಮೆ ಬಹುಮತಗಳಿಂದ ಗೆಲ್ಲಿಸಬೇಕೆಂದು ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ’ ಎಂದಿದೆ.