ಸೋಮವಾರ ಹೇಳಿಕೆ ನೀಡಿರುವ ಅವರು,‘ಕೇಂದ್ರ ಸರ್ಕಾರದ ನಿಜ ಬಣ್ಣ ಈಗ ಬಯಲಾಗಿದೆ. ನಾರಾಯಣ ಗುರುಗಳು ಹಿಂದುಳಿದ ಜಾತಿಗೆ ಸೇರಿದವರೆಂಬ ಕಾರಣಕ್ಕಾಗಿ ಅವರ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡದೆ ಅನಮಾನ ಮಾಡಿದ್ದಾರೆ. ಕೇಂದ್ರ ಸರ್ಕಾರ ಜನರ ಕ್ಷಮೆ ಕೇಳಿ, ಸ್ತಬ್ಧಚಿತ್ರಕ್ಕೆ ಅನುಮತಿ ನೀಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರಾದ ನಿರುಪಾದೆಪ್ಪ ಗುಡಿಹಾಳ ವಕೀಲ, ಎಚ್.ಎನ್.ಬಡಿಗೇರ್, ಮೋಸಿಮ್ ಖಾದ್ರಿ, ಪ್ರಾಣೇಶ, ಪದ್ಮನಾಭ, ಗಂಗಾಧರ ಶ್ರೀಕಾಂತ ರಾಗಲಪರ್ವಿ, ರಾಮಕೃಷ್ಣ ದೇವಿಕ್ಯಾಂಪ್ ಒತ್ತಾಯಿಸಿದ್ದಾರೆ.