ನೇರವೇತನ, ಗುತ್ತಿಗೆ ಪೌರಕಾರ್ಮಿಕರು, ವಾಹನ ಚಾಲಕರನ್ನು ಕಾಯಂಗೊಳಿಸಲು ಒತ್ತಾಯಿಸಿ ಕಳೆದ ಜುಲೈ 1ರಿಂದ 4ರವರೆಗೆ ರಾಜ್ಯದಾದ್ಯಂತ ಪೌರಕಾರ್ಮಿಕರು ಹೋರಾಟ ನಡೆಸಿದ್ದರು. ರಾಜ್ಯ ಸರ್ಕಾರ ಸಮಿತಿ ರಚಿಸಿತ್ತು. ಸಮಿತಿಯ ಶಿಫಾರಸ್ಸಿನಂತೆ 54 ಸಾವಿರ ನೇರವೇತನ ಕಾರ್ಮಿಕರು, ಗುತ್ತಿಗೆ ಪೌರಕಾರ್ಮಿಕರು, ವಾಹನ ಚಾಲಕರನ್ನು ಕಾಯಂಗೊಳಿಸಲು ಶಿಫಾರಸ್ಸು ಮಾಡಿದರೂ ರಾಜ್ಯ ಸರ್ಕಾರ ಕೇವಲ 11,338 ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ತೀರ್ಮಾನಿಸಿ ಏಳು ದಿನಗಳ ಆಕ್ಷೇಪಣೆಗೆ ಒಳಪಟ್ಟು ಸೆಪ್ಟಂಬರ್ 26ರಂದು ರಾಜ್ಯಪತ್ರ ಪ್ರಕಟಿಸಿತ್ತು. 20 ದಿನಗಳಾದರೂ ಅಂತಿಮ ರಾಜ್ಯ ಪತ್ರ ಪ್ರಕಟಿಸದೇ ವಿಳಂಬ ಮಾಡುತ್ತಿದ್ದು ಖಂಡನೀಯ. ಕೂಡಲೇ ರಾಜ್ಯಪತ್ರ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.