2016 ರ ಜುಲೈ 3 ರಂದು ಶ್ವಾನದಳ ವಿಭಾಗಕ್ಕೆ ತನಿಖೆಗಾಗಿ ನಿಯುಕ್ತಿ ಪಡೆದಿದ್ದ ರೂಬಿಗೆ, ಬೆಂಗಳೂರಿನ ಆಡುಗೊಡೆಯಲ್ಲಿ ಒಂಭತ್ತು ತಿಂಗಳು ತರಬೇತಿ ನೀಡಲಾಗಿತ್ತು. ಆನಂತರ ಅಪರಾಧಗಳ ತನಿಖೆಯನ್ನು ರೂಬಿ ನಿಷ್ಠೆಯಿಂದ ಮಾಡಿಕೊಂಡು ಬಂದಿದೆ. ಇಲ್ಲಿಯವರೆಗೂ ಒಟ್ಟು 246 ಅಪರಾಧ ಪ್ರಕರಣಗಳನ್ನು ತನಿಖೆ ಮಾಡಿದ್ದು, ಅದರಲ್ಲಿ 18 ಪ್ರಕರಣಗಳಲ್ಲಿ ಅಪರಾಧ ಪತ್ತೆ ಹಚ್ಚಿ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.