ಹಟ್ಟಿಚಿನ್ನದ ಗಣಿ: ಗಣಿ ಕಂಪನಿ ಒಳಗೆ ಹಾಗೂ ಅಧಿಸೂಚಿತ ಪ್ರದೇಶದ ಕಾರ್ಮಿಕರೊಬ್ಬರ ಮನೆ ಬಳಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ.
ಕಳೆದ ಐದಾರು ತಿಂಗಳಿಂದ ಕಡಿಮೆಯಾಗಿದ್ದ ಗಂಧದ ಮರ ಕಳ್ಳರ ಹಾವಳಿ ಮತ್ತೆ ಹೆಚ್ಚಿದೆ. ಇದು ನಾಗರಿಕರ ನಿದ್ದೆಗೆಡಿಸಿದೆ. ಇಷ್ಟಾದರೂ ಅರಣ್ಯ ಇಲಾಖೆ ಹಾಗೂ ಪೊಲೀಸರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಜನ ದೂರಿದ್ದಾರೆ.