ರಾಯಚೂರು:ನಗರದ ಹಳೆ ಆಶ್ರಯ ಕಾಲೋನಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರ ನೇತೃತ್ವದಲ್ಲಿ ಎಸ್ಸಿ,ಎಸ್ಟಿ ಕುಂದು ಕೊರತೆಗಳ ಸಭೆ ಶನಿವಾರ ನಡೆಯಿತು.
ಬಡಾವಣೆಯ ಜನರ ಕುಂದು ಕೊರತೆಗಳನ್ನು ಆಲಿಸಿ,ಸಮಸ್ಯೆಗಳನ್ನು ಪರಿಹರಿಸಲು ಭರವಸೆಯನ್ನು ನೀಡಿದರು. ನಾಗರ ಪಂಚಮಿ ಹಬ್ಬದ ನಿಮಿತ್ತ ಮಹಿಳೆಯರಿಗೆ,ಮಕ್ಕಳಿಗೆ ಬಾಳೆಹಣ್ಣು,ಹಾಲು,ಗಿಡ,ಸಿಹಿ ವಿತರಿಸುವ ಮೂಲಕ ನಾಗರ ಪಂಚಮಿಯ ಶುಭಾಶಯ ಕೋರಿದರು.
ಕೊರೊನಾ ಸೋಂಕು ನಿಯಂತ್ರಣ ಮಾಡಲು ತಾವೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಂಡು, ಮೇಲಿಂದಮೇಲೆ ಕೈಗಳನ್ನು ಸ್ವಚ್ಚವಾಗಿ ತೊಳೆದು ಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು.