ಮಸ್ಕಿ (ರಾಯಚೂರು ಜಿಲ್ಲೆ): ಚುನಾವಣೆ ಕರ್ತವ್ಯನಿರತ ಪೌರ ಕಾರ್ಮಿಕ ಸ್ನಾನಕ್ಕಾಗಿ ಕಾಲುವೆಯಲ್ಲಿ ಇಳಿದಾಗ ಕೊಚ್ಚಿಹೋದ ಘಟನೆ ಶುಕ್ರವಾರ ಬೆಳಿಗ್ಗೆ ಪಟ್ಟಣದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ.
ಮಸ್ಕಿ ನಿವಾಸಿ ಜಂಬಯ್ಯ ರಾಯಚೂರು (45) ಮೃತ ಪೌರಕಾರ್ಮಿಕ. ಕೆಲ ದಿನಗಳ ಹಿಂದೆಯಷ್ಟೇ ನಡೆದ ಆನ್ ಲೈನ್ ನೇಮಕಾತಿಯಲ್ಲಿ ಆಯ್ಕೆಯಾಗಿ ಪಟ್ಟಣದ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದರು.