ಕಾಳಜಿ ಅಗತ್ಯ:ಅನಾರೋಗ್ಯದಿಂದ ಬಳಲುವ ಜನರ ಹಿತದೃಷ್ಟಿಯಿಂದಾದರೂ ಆರೋಗ್ಯವಂತ ಜನರು ಎಚ್ಚರ ವಹಿಸಬೇಕಾಗಿದೆ. ಅನಾರೋಗ್ಯವಂತರಲ್ಲಿಗೆ ಆರೋಗ್ಯವಂತರೆ ಸೋಂಕು ತೆಗೆದುಕೊಂಡು ಹೋಗುವ ಅಪಾಯ ಹೆಚ್ಚಾಗಿದೆ. ವಯೋವೃದ್ಧರು, ಮಕ್ಕಳು, ಅನಾರೋಗ್ಯಪೀಡಿತರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರ ಜೀವ ಉಳಿಸಲು, ಎಲ್ಲರೂ ಸೋಂಕು ತಡೆ ಮುನ್ನಚ್ಚರಿಕೆ ಪಾಲನೆ ಮಾಡಬೇಕಾಗಿದೆ. ಸ್ವಯಂ ನಿಯಂತ್ರಣ ಹಾಕಿಕೊಂಡು ಮುನ್ನಚ್ಚರಿಕೆ ವಹಿಸಬೇಕಿದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಮಾಡುವುದು; ಇನ್ನೊಬ್ಬರ ಜೀವ ಉಳಿಸುವುದಕ್ಕಾಗಿ ಎನ್ನುವ ಕಾಳಜಿ ಬರಬೇಕಿದೆ.