ಶಕ್ತಿನಗರದ ಶಾಖೋತ್ಪನ್ನ ಕೇಂದ್ರದಿಂದ ಹೊರಸೂಸುವ ಹಾರುಬೂದಿ, ತಳಬೂದಿ, ಹಾಗೂ ಬೂದಿ ಹೊತ್ತೊಯ್ಯುವ ವಾಹನಗಳಿಂದ ವಾಯು ಮಾಲಿನ್ಯ ಉಂಟಾಗಿ ಪಿ.ಎಂ 2.5 ಸೂಕ್ಷ್ಮ ಧೂಳಿನ ಕಣಗಳು ಮಿತಿ ಮೀರಿದೆ. 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅದಕ್ಕೆ, ವಾಯು ಮಾಲಿನ್ಯ ತಪಾಸಣಾ ಉಪಕರಣಗಳಿಂದ ಪರೀಕ್ಷೆ ಮಾಡಿಸಿ ಕಂಪನಿಯ ವಿರುದ್ಧ ಹಾಗೂ ಎಂ.ಡಿ,ಇಡಿ ವರ್ಗಾವಣೆಗೆ ಒತ್ತಾಯಿಸಿ ಬಂದ್ಗೆ ಕರೆ ನೀಡಲಾಗಿದೆ ಎಂದರು.