ನಗರದ ಯುವಕ ಶಾಂತಕುಮಾರ, ನಿಜಲಿಂಗಪ್ಪ ಕಾಲೋನಿಯ ಕೆಇಬಿ ಶಾಲೆ ಬಳಿ ಇರುವ ಬಿಎಸ್ಎನ್ಎಲ್ ಬೃಹತ್ ಟವರ್ನ್ನು ಏರಿ ಕುಳಿತ್ತಿದ್ದ. ಈ ಸುದ್ದಿ ತಿಳಿದು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಧಾವಿಸಿದರು. ಬೇಡಿಕೆ ಈಡೇರಿಸುವುದಾಗಿ ಹೇಳಿ ಬಹಳ ಹೊತ್ತಿನವರೆಗೂ ಮನವೊಲಿಸುವ ಯತ್ನ ನಡೆಸಿದರು. ಶಾಂತಕುಮಾರ ತಾಯಿ ಕೂಡಾ ರೋದಿಸುತ್ತಾ ಕೆಳಗೆ ಬರುವಂತೆ ಕೋರಿದರೂ ಸ್ಪಂದಿಸಲಿಲ್ಲ.