ತಾಲ್ಲೂಕಿನ ಕಣ್ಣೂರು ಗ್ರಾಮದ 15ಕ್ಕೂ ಹೆಚ್ಚು ಜನರು ಗೂಡ್ಸ್ ವಾಹನದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದರು. ಕಾರಿನಲ್ಲಿ ತಂದೆ-ತಾಯಿ ಹಾಗೂ ಮೂವರು ಮಕ್ಕಳು ಹೊಸಪೇಟೆಯಿಂದ ಹೈದರಾಬಾದ್ಗೆ ತೆರಳುತ್ತಿದ್ದರು. ಗೊರೇಬಾಳ ಗ್ರಾಮದ ಸಮೀಪದಲ್ಲಿ ನಡುವೆ ಡಿಕ್ಕಿ ಸಂಭವಿಸಿದ್ದು ಸಕರು ಸಾಗಣೆ ವಾಹನ ಪಕ್ಕದ ಗದ್ದೆಗೆ ಪಲ್ಟಿ ಹೊಡೆದಿದೆ.
ಬುಲೇರಾ ವಾಹನದಲ್ಲಿದ್ದ 15 ಜನರಲ್ಲಿ ಓರ್ವ ಮಹಿಳೆ ಶಾಂತಾಬಾಯಿ (36) ತಲೆಗೆ, ಓರ್ವ ಬಾಲಕ ಪ್ರಜ್ವಲ್ ಸಿಂಗ್ (15) ಮುಖ ಮತ್ತು ತಲೆಗೆ ಹಾಗೂ ಕಾರನಲ್ಲಿದ್ದ ಓರ್ವ ಬಾಲಕಿ ಅಲ್ಫಿಯಾ ಖಾನ್ (8) ತಲೆಗೆ ಗಂಭೀರ ಗಾಯಗಳಾಗಿವೆ. ಈ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಓಪಿಡಿಗೆ ರವಾನಿಸಲಾಗಿದೆ.