<p>ಸಿಂಧನೂರು: ತಾಲ್ಲೂಕಿನ ಸತ್ಯವತಿ ಕ್ಯಾಂಪ್ನಲ್ಲಿ ನಾಲ್ಕು ವರ್ಷದ ಬಾಲಕ ತೆರೆದ ಸೆಪ್ಟಿಕ್ ಟ್ಯಾಂಕಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.</p>.<p>ಮಲ್ಲಯ್ಯ ಈರಣ್ಣ (4) ಮೃತ ಬಾಲಕ. ಏಪ್ರಿಲ್ 3ರಂದು ಗುಡ್ ಫ್ರೈಡೆ ದಿನ ಈ ಘಟನೆ ನಡೆದಿದ್ದು, ಬಾಲಕನ ತಂದೆ ಈರಣ್ಣ ನೀಡಿದ ದೂರಿನನ್ವಯ ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗುಡ್ ಫ್ರೈಡೆ ಪ್ರಯುಕ್ತ ಬಾಲಕನ ತಾಯಿ ಸುಮಿತ್ರಾ ಮತ್ತು ಕುಟುಂಬದವರು ಪಕ್ಕದ ಚರ್ಚ್ಗೆ ಹೋಗಿದ್ದರು. ಈ ವೇಳೆ ಆ ಮಗು ಸೆಪ್ಟಿಕ್ ಟ್ಯಾಂಕ್ನ ಕಡೆ ಹೋಗಿ ಟ್ಯಾಂಕ್ನೊಳಗೆ ಬಿದ್ದಿರಬೇಕು ಎಂದು ಪೊಲೀಸರು ಊಹಿಸಿದ್ದಾರೆ. ಆದರೆ, ಬಾಲಕನು ಪಾಲಕರು ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.</p>.<p>ಚಿದಾನಂದಪ್ಪ ಅವರು ಸೆಪ್ಟಿಕ್ ಟ್ಯಾಂಕ್ ಮುಚ್ಚದೆ ಕೆಲವು ವರ್ಷಗಳಿಂದ ತೆರೆದ ಸ್ಥಿತಿಯಲ್ಲಿ ಬಿಟ್ಟಿದ್ದಾರೆ. ಈ ಹಿಂದೆ ಒಂದು ಎತ್ತು ಟ್ಯಾಂಕ್ನಲ್ಲಿ ಬಿದ್ದು ಕಾಲು ಮುರಿದುಕೊಂಡಿತ್ತು. ಇದರಲ್ಲಿಯೇ ಒಂದು ನಾಯಿ ಸಹ ಬಿದ್ದು ಸತ್ತಿದೆ. ಚಿದಾನಂದಪ್ಪ ಅವರ ಬೇಜವಾಬ್ದಾರಿ ಸಾಕು ಪ್ರಾಣಿ ಹಾಗೂ ಮಗುವಿನ ಜೀವ ತೆಗೆದುಕೊಂಡಿದೆ ಎಂದು ದೂರಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-35-637360667</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿಂಧನೂರು: ತಾಲ್ಲೂಕಿನ ಸತ್ಯವತಿ ಕ್ಯಾಂಪ್ನಲ್ಲಿ ನಾಲ್ಕು ವರ್ಷದ ಬಾಲಕ ತೆರೆದ ಸೆಪ್ಟಿಕ್ ಟ್ಯಾಂಕಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.</p>.<p>ಮಲ್ಲಯ್ಯ ಈರಣ್ಣ (4) ಮೃತ ಬಾಲಕ. ಏಪ್ರಿಲ್ 3ರಂದು ಗುಡ್ ಫ್ರೈಡೆ ದಿನ ಈ ಘಟನೆ ನಡೆದಿದ್ದು, ಬಾಲಕನ ತಂದೆ ಈರಣ್ಣ ನೀಡಿದ ದೂರಿನನ್ವಯ ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗುಡ್ ಫ್ರೈಡೆ ಪ್ರಯುಕ್ತ ಬಾಲಕನ ತಾಯಿ ಸುಮಿತ್ರಾ ಮತ್ತು ಕುಟುಂಬದವರು ಪಕ್ಕದ ಚರ್ಚ್ಗೆ ಹೋಗಿದ್ದರು. ಈ ವೇಳೆ ಆ ಮಗು ಸೆಪ್ಟಿಕ್ ಟ್ಯಾಂಕ್ನ ಕಡೆ ಹೋಗಿ ಟ್ಯಾಂಕ್ನೊಳಗೆ ಬಿದ್ದಿರಬೇಕು ಎಂದು ಪೊಲೀಸರು ಊಹಿಸಿದ್ದಾರೆ. ಆದರೆ, ಬಾಲಕನು ಪಾಲಕರು ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.</p>.<p>ಚಿದಾನಂದಪ್ಪ ಅವರು ಸೆಪ್ಟಿಕ್ ಟ್ಯಾಂಕ್ ಮುಚ್ಚದೆ ಕೆಲವು ವರ್ಷಗಳಿಂದ ತೆರೆದ ಸ್ಥಿತಿಯಲ್ಲಿ ಬಿಟ್ಟಿದ್ದಾರೆ. ಈ ಹಿಂದೆ ಒಂದು ಎತ್ತು ಟ್ಯಾಂಕ್ನಲ್ಲಿ ಬಿದ್ದು ಕಾಲು ಮುರಿದುಕೊಂಡಿತ್ತು. ಇದರಲ್ಲಿಯೇ ಒಂದು ನಾಯಿ ಸಹ ಬಿದ್ದು ಸತ್ತಿದೆ. ಚಿದಾನಂದಪ್ಪ ಅವರ ಬೇಜವಾಬ್ದಾರಿ ಸಾಕು ಪ್ರಾಣಿ ಹಾಗೂ ಮಗುವಿನ ಜೀವ ತೆಗೆದುಕೊಂಡಿದೆ ಎಂದು ದೂರಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-35-637360667</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>