ರೈಲ್ವೆ ಗ್ರಾಹಕರ ಸಲಹಾ ಸಮಿತಿ ಸದಸ್ಯ ಬಾಬುರಾವ್ ಅವರು ಇದೇ ವೇಳೆ ಮನವಿಯೊಂದನ್ನು ಸಲ್ಲಿಸಿದರು. ರಾಯಚೂರು–ಕಾಕಿನಾಡ ನಡುವೆ ಹೊಸ ರೈಲು ಸಂಚಾರ ಸೇವೆ ಆರಂಭಿಸಬೇಕು. ಸುಕ್ಷೇತ್ರ ಮಂತ್ರಾಲಯ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್ ಹಾಗೂ ಲಿಫ್ಟ್ ಅಳವಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ರಾಯಚೂರು–ಕಾಚಿಗೂಡ ರೈಲ್ವೆ ವೇಳೆಯನ್ನು ಬದಲಾವಣೆ ಮಾಡಿ, ಸಂಜೆ ಬದಲು ಬೆಳಿಗ್ಗೆ 6 ಗಂಟೆಗೆ ಓಡಿಸಬೇಕು. ರಾಯಚೂರು – ಕಲಬುರಗಿ ಮಧ್ಯೆ ಸಂಚರಿಸುವ ಡಿಮೊ ರೈಲ್ವೆಗೆ ಎರಡು ಕೋಚ್ಗಳನ್ನು ಅಳವಡಿಸಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ವಿತರಿಸುವ ವ್ಯವಸ್ಥೆ ಮರು ಜಾರಿಗೊಳಿಸಬೇಕು ಎಂದು ಕೇಳಿಕೊಳ್ಳಲಾಯಿತು.