ಜಿಲ್ಲೆಯ ವಿವಿಧ ಭಾಗಗಳಿಂದ ಒಂಭತ್ತು ಜನ ಸಾರ್ವಜನಿಕರು ಕರೆ ಮಾಡಿ ಅಹವಾಲುಗಳನ್ನು ತಿಳಿಸಿದರು. ಸಿರವಾರ ಗ್ರಾಮದಲ್ಲಿ ಅಕ್ರಮ ಚಟುವಟಿಕೆಗಳಾದ ಮಟಕಾ, ಜೂಟಾಟ ನಿಯಂತ್ರಿಸುವ ಬಗ್ಗೆ, ಸ್ಟೇಷನ್ ಏರಿಯಾದಲ್ಲಿ ಮನೆ ಕಟ್ಟಿಸಲು ಸಂಬಂಧಿಗಳು ತೊಂದರೆ ಮಾಡುತ್ತಿರುವ ಬಗ್ಗೆ, ದೇವದುರ್ಗ ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ, ಕವಿತಾಳ ಗ್ರಾಮದಲ್ಲಿ ರಸ್ತೆ ಅಗಲೀಕರಣ ಬಗ್ಗೆ, ರಾಯ ಚೂರು ಪಟ್ಟಣದ ಕಾಯಿಪಲ್ಲೆ ಮಾರ್ಕೆಟ್ನಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ, ಕೆರೆಬು ದೂರು ಗ್ರಾಮದಲ್ಲಿ ಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ, ಸಿಂಧನೂರು ತಾಲೂಕಿನ ತೋಳದಿನ್ನಿ ಗ್ರಾಮದಲ್ಲಿ ಜಮೀನು ವಿವಾದ ಬಗ್ಗೆ ಮತ್ತು ಸಾದಾಪೂರ ಗ್ರಾಮದಲ್ಲಿ ಭಟ್ಟಿ ಸಾರಾಯಿ ತಯಾರಿಸುವಿಕೆ ಅಹವಾಲುಗಳು ಸಲ್ಲಿಕೆಯಾದವು.