ರಾಯಚೂರು: ಲೌಕಿಕ ಪ್ರಪಂಚದ ಆಸೆ, ಪ್ರಲೋಭನೆಗಳನ್ನೆಲ್ಲ ಬದಿಗೊತ್ತಿ ಮೋಕ್ಷ ಸಾಧನೆಯ ಮಾರ್ಗವನ್ನು ಹರಿಭಕ್ತೆ ಹೆಳವನಕಟ್ಟೆ ಗಿರಿಯಮ್ಮ ಅವರು ತಮ್ಮ ಕೀರ್ತನೆಗಳ ಮೂಲಕ ಬೋಧಿಸಿದ್ದಾರೆ ಎಂದು ಯರಗೇರಾ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕಿ ಡಾ.ಪದ್ಮಜಾ ದೇಸಾಯಿ ಹೇಳಿದರು.
ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಹರಿದಾಸ ನಮನ ಗಾಯನ ಮಾಲಿಕೆಯ 11 ನೇ ಆವೃತ್ತಿಯಲ್ಲಿ ಹೆಳವನಕಟ್ಟೆ ಗಿರಿಯಮ್ಮ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಉತ್ಕಟ ಭಕ್ತಿಯನ್ನು ಹೊಂದಿದ್ದ ಗಿರಿಯಮ್ಮ ಭಗನವಂತನ ನಾಮಸ್ಮರಣೆ ಮತ್ತು ಆರಾಧನೆಯಲ್ಲಿ ಮುಳುಗಿದ್ದರು. ಕರ್ನಾಟಕದ ಮೀರಾಬಾಯಿ ಎಂದು ಅವರನ್ನು ಧಾರಾಳವಾಗಿ ಕರೆಯಬಹುದಾಗಿದೆ ಎಂದರು.
ಹರಪನಹಳ್ಳಿ ಭೀಮವ್ವ ಅವರು ಜೀವನ ಸಾಧನೆ ಕುರಿತು ಶಾಂತಾ ಕುಲಕರ್ಣಿ ಮಾತನಾಡಿದರು.