ರಾಯಚೂರು: ಈಚೆಗೆ ಸುರಿದ ಮಳೆಯಿಂದಾಗಿ ನಗರದ ಪಂಚಬೀಬಿ ಪಹಡದ ಐತಿಹಾಸಿಕ ಕೋಟೆ ಕಟ್ಟಡ ಕುಸಿದಿದೆ.
ನಗರದ ಕೇಂದ್ರಬಿಂದುವಾಗಿದ್ದ ಈ ಕೋಟೆ ಕಟ್ಟಡವು ಕೇಂದ್ರ ಬಸ್ ನಿಲ್ದಾಣ ಸಮೀಪದ ಬೆಟ್ಟದ ಮೇಲಿದೆ.
ಕಮಾನ್ ಮತ್ತು ಆಶ್ರಯ ಖಾನಾ ಶಿಥಿಲಗೊಂಡಿದ್ದವು. ಮಳೆಗೆ ನೆನೆದ ಪರಿಣಾಮ ಕೋಟೆ ಮುಂಭಾಗದ ಒಂದು ಬದಿಯ ಗೋಡೆ ಕುಸಿದಿದೆ. ಕಟ್ಟಡ ಸಾಕಷ್ಟು ಹಳೆಯದಾಗಿದ್ದು, ಉಳಿದ ಭಾಗ ಕೂಡ ಕುಸಿಯುವ ಭೀತಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.