‘ಕಾಲುವೆ ಹಾಳಾದ ಸ್ಥಳದಲ್ಲಿ ದೊಡ್ಡ-ದೊಡ್ಡ ಮರಗಳಿದ್ದು, ದೊಡ್ಡ ಮರವೊಂದು ಕಾಲುವೆ ಮೇಲೆ ಉರುಳಿಬಿದ್ದ ಪರಿಣಾಮ ಕಾಲುವೆ ಕುಸಿತವಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರರಿಗೂ ಸೂಚನೆ ನೀಡಲಾಗಿದ್ದು, ತೀವ್ರ ಗತಿಯಲ್ಲಿ ಕೆಲಸ ಸಾಗಿದೆ. ರೈತರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಮಾರ್ಚ್ 13 ರ ಸಂಜೆಯಿಂದಲೇ ಕಾಲುವೆಗೆ ನೀರು ಬರಲಿದ್ದು ಭತ್ತದ ಬೆಳೆಗೆ ನೀರು ಹರಿಸಿಕೊಳ್ಳಬಹುದಾಗಿದೆ’ ಎಂದರು