‘ಯಾವ ನಿರ್ಮಾಪಕರಿಂದಲೂ ಹಣ ಪಡೆದುಕೊಂಡು ಬಂದಿಲ್ಲ. ‘ತುಂಗಭದ್ರಾ’ ಸಿನಿಮಾದಲ್ಲಿ ನಟಿಸುವಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇಲ್ಲಿಗೆ ನನ್ನನ್ನು ಯಾರೂ ಕರೆದು ತಂದಿಲ್ಲ. ನಾನೇ ಒಪ್ಪಿಕೊಂಡು ಬಂದಿದ್ದು, ನಮ್ಮಜ್ಜಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ನಮ್ಮ ತಾಯಿ ಕೂಡಾ ಆಸ್ಪತ್ರೆಯಲ್ಲಿ ದಾಖಲಾಗಿ ನಾಟಕ ಮಾಡುತ್ತಿದ್ದಾರೆ’ ಎಂದು ವಿಜಯಲಕ್ಸ್ಮಿ ದೂರಿದ್ದಾರೆ.
‘ಈ ರೀತಿ ವಿಷ ಸೇವಿಸುವುದಾಗಿ ಈ ಮೊದಲು ಕೂಡಾ ತಾಯಿ ನಾಟಕ ಮಾಡಿದ್ದರು. ನನ್ನ ತಂದೆ-ತಾಯಿ ಬೇರ್ಪಟ್ಟು ಆರು ವರ್ಷಗಳಾಗಿದೆ. ಸದ್ಯ ನನ್ನ ತಾಯಿ ಮತ್ತು ಸಾಕು ತಂದೆ ಇದ್ದು, ಸಾಕಷ್ಟು ಕಿರುಕುಳ ನೀಡಿದ್ದಾರೆ. ಚಿತ್ರ-ವಿಚಿತ್ರ ಹಿಂಸೆ ಕೊಟ್ಟಿದ್ದಾರೆ. ನಾನು ಮದುವೆ ಮಾಡಿಕೊಂಡಿರುವ ವಿಷಯ ತಿಳಿದುಕೊಂಡು ನನ್ನ ಗಂಡನನ್ನು ಸಾಯಿಸಲು ಯೋಜನೆ ಮಾಡಿದ್ದಾರೆ’ ಎಂದು ವಿಜಯಲಕ್ಷ್ಮಿ ಅವರು ಹೇಳುತ್ತಿದ್ದಾರೆ.