ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಲೋಕಸಭೆ ಕ್ಷೇತ್ರ: ಎರಡು ನಾಮಪತ್ರಗಳು ತಿರಸ್ಕೃತ

Last Updated 5 ಏಪ್ರಿಲ್ 2019, 14:28 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಲ್ಲಿಕೆಯಾಗಿದ್ದ ಎಂಟು ಅಭ್ಯರ್ಥಿಗಳ ನಾಮಪತ್ರಗಳ ಪೈಕಿ ಎರಡು ತಿರಸ್ಕೃತಗೊಂಡಿವೆ.

ಸಿಪಿಐ (ಎಂಎಲ್‌) ರೆಡ್‌ಸ್ಟಾರ್‌ ಪಕ್ಷದ ಅಮರೇಶ ನಾಯಕ ಹಾಗೂ ರಾಷ್ಟ್ರೀಯ ಸಮಾಜ ಪಕ್ಷದ ಮುದುಕಪ್ಪ ನಾಯಕ ಅವರ ನಾಮಪತ್ರಗಳು ತಿರಸ್ಕೃತವಾಗಿವೆ. ಅಭ್ಯರ್ಥಿ ವಿವರ ಹಾಗೂ ಆಸ್ತಿ ವಿವರ ಇರುವ ಅಫಡವಿಟ್‌ ಸಮರ್ಪಕವಾಗಿ ಭರ್ತಿ ಮಾಡದೆ ಇರುವುದು ನಾಮಪತ್ರ ತಿರಸ್ಕಾರವಾಗುವುದಕ್ಕೆ ಕಾರಣ.

ಕಾಂಗ್ರೆಸ್‌ನಿಂದ ಬಿ.ವಿ. ನಾಯಕ, ಬಿಜೆಪಿಯಿಂದ ಅಮರೇಶ್ವರ ನಾಯಕ, ಪಕ್ಷೇತರ ಅಭ್ಯರ್ಥಿ ರಂಗಪ್ಪ ನಾಯಕ ಸೇರಿದಂತೆ ಆರು ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ನಾಮಪತ್ರ ಹಿಂಪಡೆಯುವುದಕ್ಕೆ ಏಪ್ರಿಲ್‌ 8 ಕೊನೆಯ ದಿನ. ಆನಂತರ ಚುನಾವಣೆ ಪ್ರಚಾರ ಮತ್ತಷ್ಟು ರಂಗೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT