ರಾಯಲ್ಟಿ ಮೂಲಕ ಮರಳು ಸಾಗಿಸುವ ಸಮಯವನ್ನು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೂ ನಿಗದಿಪಡಿಸಬೇಕು. ದೇವದುರ್ಗ ತಾಲ್ಲೂಕಿನ ಮುಷ್ಟಳ್ಳಿ, ಬೇವಿನಾಳ, ಗೌಡೂರು ಸ್ಟಾಕ್ ಯಾರ್ಡ್ನಲ್ಲಿ ಅರ್ಧ ಟ್ರಿಪ್ ಲೋಡ್ ಮಾಡಿಕೊಂಡು ವೇ ಬ್ರಿಜ್ನಲ್ಲಿ ತೂಕವಾದ ಬಳಿಕ ಫುಲ್ ಲೋಡ್ ಮಾಡಲಾಗುತ್ತಿದೆ. ಗುತ್ತಿಗೆದಾರರು ಸ್ಥಳದಲ್ಲೇ ಕಾನೂನು ಪಾಲನೆ ಮಾಡುತ್ತಿಲ್ಲ. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.