ರಾಯಚೂರು: ‘ಇನ್ನು ಮುಂದೆ ರಾಜ್ಯದಲ್ಲಿ ಯಾವುದಾದರೂ ರಾಜಕಾರಣಿ ರೆಸಾರ್ಟ್ಗೆ ಹೋಗಿ ರಾಜಕಾರಣ ಮಾಡಿದ್ದು ಸುದ್ದಿಯಾದರೆ, ಅಂಥವರಿಗೆ ರೈತ ಸಂಘದ ಮಹಿಳಾ ಕಾರ್ಯಕರ್ತರು ಸೆಗಣಿ ಎರಚಿ ಪ್ರತಿಭಟನೆ ಮಾಡಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ರಾಜಕೀಯವು ಜನರಿಗೆ ಹೇಸಿಗೆ ತರಿಸುವಂತಿದೆ. ಪೋಲಿ ಪುಂಡರಿಗೆ ಮತದಾರರು ಬುದ್ಧಿ ಕಲಿಸಬೇಕು. ಶಾಸಕರ ಮಾರಾಮಾರಿ ಘಟನೆಯಿಂದ ರಾಜ್ಯಕ್ಕೆ ಅಪಮಾನವಾಗಿದೆ’ ಎಂದರು.