ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೆಗೌಡರ ಕನಸಿನ ಕೂಸು ಎನ್ಆರ್ಬಿಸಿ ಯೋಜನೆ. ಈಗ ನಾಲೆಯ ಆಧುನೀಕರಣಕ್ಕೆ ₹956 ಕೋಟಿ ಬಿಡುಗಡೆಯಾಗಿದ್ದು ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿದರೆ ಪರಿಶೀಲನೆ ಮಾಡದೇ ಉಡಾಫೆಯ ಉತ್ತರ ನೀಡಿದ್ದಾರೆ. ಕೊರೊನಾ ವಿಷಯಕ್ಕೆ ಮಾತ್ರ ಸೀಮಿತರಾಗಿದ್ದು ಇಷ್ಟು ದೊಡ್ಡ ಕಾಮಗಾರಿಯನ್ನು ಹಗುರವಾಗಿ ಪರಿಗಣಿಸಿದಂತಿದೆ ಎಂದು ದೂರಿದರು.