ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾತ್ರಿಗರು ಆತ್ಕೂರಿನಿಂದ ಕೃಷ್ಣ ನದಿ ಮೂಲಕ ತೆಪ್ಪ, ಹರಿಗೋಲಿನಿಂದ ಹೋಗಬೇಕಿದ್ದು ತೀವ್ರ ತೊಂದರೆಯಾಗಿದೆ.ಸಮಸ್ಯೆ ನಿವಾರಣೆಗೆ 2009 ರಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಜಿಲ್ಲಾಡಳಿತ ಲೋಕೋಪಯೋಗಿ ಇಲಾಖೆಗೆ ವಹಿಸಿತ್ತು. ನಂತರ 2012ರಲ್ಲಿ ಹೈದರಾಬಾದ್ ಶೇಷಗಿರಿ ರಾವ್ ಗುತ್ತಿಗೆದಾರರಿಗೆ ₹14.25 ಕೋಟಿಗೆ ಟೆಂಡರ್ ಪಡೆದು ಕೇವಲ ಪಿಲ್ಲರ್ ಮಾತ್ರ ನಿರ್ಮಾಣ ಮಾಡಿ ಕಾಮಗಾರಿ ಪೂರ್ಣಗೊಳಿಸದೇ ಅರ್ಧಕ್ಕೆ ಕೈಬಿಟ್ಟಿದ್ದಾರೆ ಎಂದರು.