‘ಕಂಪೆನಿ ನಷ್ಟದ ಕುರಿತು ನಿರ್ದೇಶಕರಿಗೆ, ಕುಟುಂಬದವರಿಗೆ ತಿಳಿಸಿಲ್ಲ ಎಂದು ಸಿದ್ದಾರ್ಥ ಅವರು ಮರಣಪತ್ರದಲ್ಲಿ ಬರೆದಿರುವುದು ಸುಳ್ಳಿನಿಂದ ಕೂಡಿದೆ. ಕಾಯ್ದೆ ಪ್ರಕಾರ ಕಂಪೆನಿಯ ಎಲ್ಲ ಆಗುಹೋಗುಗಳಿಗೆ ನಿರ್ದೇಶಕರೂ ಹೊಣೆಗಾರರು. ಸಿಡಿಇಎಲ್ ಮೂಲಕ ₹3,600 ಕೋಟಿ ಸಂಗ್ರಹಿಸಿ ಬೇರೆಬೇರೆ 49 ಕಂಪೆನಿಗಳಿಗೆ ಹಣ ತೊಡಗಿಸಲಾಗಿದೆ. ವಿದೇಶ ಕಂಪೆನಿಯಲ್ಲಿ ಪಾಲುಪಡೆದ ಗೃಹಣಿ ಮಾಳವಿಕಾ ಹೆಗಡೆ ಅವರಿಗೆ ₹128 ಕೋಟಿ ಎಲ್ಲಿಂದ ಬಂತು ಎಂಬುದು ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.