1983 ರಲ್ಲಿ ಕಾಂಗ್ರೆಸ್ ಪಕ್ಷ ಆರ್. ಆಂಜನೇಯಲು, 1992 ರಲ್ಲಿ ಎಂ. ಈರಣ್ಣ ಅವರನ್ನು ಅಧ್ಯಕ್ಷರಾಗಿ, 1998ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ಪುನಾ 2003ರಲ್ಲಿ ಅಧ್ಯಕ್ಷರಾಗಿ ಮಾಡಲಾಗಿತ್ತು. ಮುಂದುವರೆದು ಮಮತಾ ಸುಧಾಕರ್, ಹೆಮಲತಾ ಬೂದೆಪ್ಪ ಅಧ್ಯಕ್ಷರು ಜಯಣ್ಣ ಉಪಾಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಕೇವಲ ಮಾದಿಗ ಸಮಾಜದ ಅಭ್ಯರ್ಥಿಗಳಿಗೆ ಮನ್ನಣೆ ನಿಡಲಾಗಿದೆ. ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಸಮಾನ ಅವಕಾಶ ನೀಡದೇ ಛಲವಾದಿ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.