ದೇಶವು ಆರ್ಥಿಕ ಹಿಂಜರಿತದಿಂದ 40 ವರ್ಷಗಳ ಹಿಂದಕ್ಕೆ ಹೋಗಿದ್ದನ್ನು ಜನರು ಪ್ರಶ್ನಿಸಲಾಗದಂತಹ ಧಾರ್ಮಿಕ ಉನ್ಮಾದ, ನಕಲಿ ದೇಶಭಕ್ತಿ, ಷಡ್ಯಂತ್ರದ ಭಾಗವಾಗಿ ಬಿಜೆಪಿ ಕೇಂದ್ರ ಸರ್ಕಾರವು ಜಾರಿಗೊಳಿಸಿದೆ. ಪೌರತ್ವ ಕಾಯ್ದೆ ತಿದ್ದುಪಡಿ 2019, ಪೌರತ್ವ ಜನಸಂಖ್ಯೆ ನೊಂದಣಿ 2020 ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕೆಂದು ಹಾಗೂ ಪೌರತ್ವ ಕಾಯ್ದೆ 1955 ರಲ್ಲಿನ ರಾಷ್ಟ್ರೀಯ ಗುರುತಿನ ಕಾರ್ಡುಗಳ ಜಾರಿಗೆಗೆ ಸಂಬಂಧಿಸಿದಂತೆ ನಿಯಮ 14ಎ, 18(2)(1ಎ) ಗಳನ್ನು ರದ್ದು ಮಾಡಬೇಕು. ವಿದೇಶಿಯರ ತಿದ್ದುಪಡಿ ಆರ್ಡರ್ 2019ನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.