ಭವ್ಯ ಪರಂಪರೆ ಹೊಂದಿದ ಉಟಕನೂರು ಮಠವು ಶರಣರ ಸಂತತಿಯಿಂದಾಗಿ ಆಚಾರ ಮಠವಾಗಿದ್ದು, 20ನೇ ಶತಮಾನದಲ್ಲಿ ಬದುಕಿ ಬಾಳಿದ ಗುರುಪಾದಯ್ಯಸ್ವಾಮಿ ಎನ್ನುವವರ ಮೂರನೇ ಪತ್ನಿಗೆ ಜನಿಸಿದ ಗಂಡು ಮಗು ಸಂಸಾರದ ಕಡೆ ಗಮನಕೊಡದೆ ಹುಚ್ಚರಂತೆ ವರ್ತಿಸ ತೊಡಗಿದಾಗ ಚಿಂತಿತರಾದ ಗುರುಪಾದಯ್ಯನವರು ಕೇದಾರದ ಜಗದ್ಗುರುಗಳ ಬಳಿ ತಮ್ಮ ನೋವನ್ನು ಹೇಳಿಕೊಂಡರು ಎನ್ನಲಾಗಿದೆ.