ಪೂಜಾ ಸಾಮಗ್ರಿಗಳ ಮಾರಾಟ, ಖರೀದಿ ಭರಾಟೆ ಮಾಯವಾಗಿದೆ. ಬೆರಳೆಣಿಕೆಯಷ್ಟು ಜನರು ಮಾತ್ರ ಮಾರುಕಟ್ಟೆಗೆ ಬಂದಿದ್ದರು. ರಾಯಚೂರಿನ ಸರಾಫ್ ಬಜಾರ್, ಬಟ್ಟೆ ಬಜಾರ್, ಮಹಾವೀರ ಸರ್ಕಲ್, ಪಟೇಲ್ ರಸ್ತೆ, ಭಂಗಿಕುಂಟಾ ರಸ್ತೆ, ಗಂಜ್ ರಸ್ತೆ, ಲೋಹರ್ ಗಲ್ಲಿ, ತೀನ್ ಕಂದಿಲ್ ಹಾಗೂ ಹರಿಹರ ರಸ್ತೆಗಳುದ್ದಕ್ಕೂ ಹಣ್ಣು ಮತ್ತು ಪೂಜಾ ಸಾಮಗ್ರಿ ಮಾರಾಟ ಮಾಡುವ ತಳ್ಳುಗಾಡಿಗಳು ನಿಂತಿದ್ದವು. ನಿರೀಕ್ಷಿತ ಮಟ್ಟದಲ್ಲಿ ಜನರು ಬಾರದೆ ವ್ಯಾಪಾರಕ್ಕೆ ಮಂಕು ಕವಿದಿತ್ತು.