‘ಗರ್ಭವತಿ ಆಗುತ್ತಿದ್ದಂತೆ ನನ್ನನ್ನು ಬಿಟ್ಟು ಹೋಗಲು ಆರೋಪಿ ಯತ್ನಿಸಿದ. ಪೋಷಕರಿಗೆ ತಿಳಿಸುವುದಾಗಿ ಹೇಳಿದ ಬಳಿಕ ಬೆಂಗಳೂರಿನ ಸಿದ್ದಾಪುರದ ಶಿವನ ದೇವಸ್ಥಾನದಲ್ಲಿ ಮದುವೆಯಾದ. ಮಗು ಜನಿಸಿದ 6 ತಿಂಗಳ ನಂತರ ‘ನನ್ನ ತಂದೆಗೆ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಇದೆ’ ಎಂದು ಹೇಳಿ ಹೋದವ ಮರಳಿ ಬರಲಿಲ್ಲ. ಫೋನ್ ಸ್ವಿಚ್ ಆಫ್ ಇರುತಿತ್ತು. ನಿಡಿಗೋಳಗೆ ಹಲವು ಸಲ ಬಂದರೂ ಯಂಕನಗೌಡ ಸಿಗಲಿಲ್ಲ. ತುರ್ವಿಹಾಳ ಪೊಲೀಸ್ ಠಾಣೆಗೆ ಮೊರೆ ಹೋದಾಗ, ದೂರು ದಾಖಲಿಸಿಕೊಳ್ಳಲಿಲ್ಲ’ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.