ಲಿಂಗಸುಗೂರು: ‘ಚಿತ್ರದುರ್ಗ ಜಿಲ್ಲೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿ ಯಾದವ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿ ಶಾಲಂಸಾಬ ಅವರಿಗೆ ಸಲ್ಲಿಸಲಾಯಿತು.
ರಾಜ್ಯದಾದ್ಯಂತ ಯಾದವ ಸಮಾಜದವರು ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಪೂರ್ಣಿಮಾ ಅವರ ಗೆಲುವಿನಿಂದ ಬಿಜೆಪಿ ಪಕ್ಷಕ್ಕೆ ಬಲ ಬಂದಿದೆ ಎಂದು ಹೇಳಿದರು.
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಯಾದವ ಸಮುದಾಯ ಹಿಂದುಳಿದಿದೆ. ಪ್ರಾತಿನಿಧ್ಯ ನೀಡಬೇಕು ಎಂದರು. ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ ಯಾದವ, ಮುಖಂಡರಾದ ಭೀಮಣ್ಣ ಟೇಲರ್, ನಾಗರಾಜ, ರಮೇಶ ಯಾದವ, ಕರಿಯಪ್ಪ, ಭೀಮಣ್ಣ ಹುಲಗಿ ಹಾಗೂ ಗಂಗಪ್ಪ ಮುದಗಲ್ ಇದ್ದರು.