<p>ಹಟ್ಟಿ ಚಿನ್ನದ ಗಣಿ: ಗುರುಗುಂಟಾ ಹೋಬಳಿ ವ್ಯಾಪ್ತಿಗೆ ಬರುವ ಯರಜಂತಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಆಲಿಕಲ್ಲು ಸಹಿತ ಮಳೆಯಾಗಿದೆ.</p>.<p>ಯರಜಂತಿ ಗ್ರಾಮದ ಹನುಮಂತಿ ಬಸಯ್ಯ ಎನ್ನುವ ರೈತ ಮಹಿಳೆಯ ಮನೆಯ ತಗಡಿನ ಟಿನ್ಗಳು ಗಾಳಿಗೆ ಹಾರಿ ಹೋಗಿವೆ. ಇದರಿಂದ ಮನೆಯಲ್ಲಿ ಇದ್ದ ಜೋಳ, ಸಜ್ಜೆ ಮಳೆಗೆ ಸಿಲುಕಿ ₹ 75 ಸಾವಿರ ಮೌಲ್ಯದ ದವಸ ಧ್ಯಾನ್ಯಗಳು ಹಾಳಾಗಿವೆ ಎಂದು ಹನುಮಂತಿ ಅಲವತ್ತುಕೊಂಡರು.</p>.<p>ಆಲಿಕಲ್ಲು ಮಳೆಗೆ, ಲಕ್ಷ್ಮಿ, ವೆಂಕಟೇಶ, ದೇವಮ್ಮ ವೆಂಕಟೇಶ, ಹನುಮಂತಿ ಅವರಿಗೆ ಗಾಯವಾಗಿದ್ದು ಗುರುಗುಂಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಗ್ರಾಮಸ್ಧರು ತಿಳಿಸಿದ್ದಾರೆ.</p>.<p>ಮಳೆಗೆ ಹಾನಿಯಾದ ಸ್ಧಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ರೈತ ಮಹಿಳೆಗೆ ಪರಿಹಾರ ಒದಗಿಸಿಕೊಡಬೇಕೆಂದು ಗ್ರಾಮಸ್ಧರು ಒತ್ತಾಯ ಮಾಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260430-32-192683416</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಟ್ಟಿ ಚಿನ್ನದ ಗಣಿ: ಗುರುಗುಂಟಾ ಹೋಬಳಿ ವ್ಯಾಪ್ತಿಗೆ ಬರುವ ಯರಜಂತಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಆಲಿಕಲ್ಲು ಸಹಿತ ಮಳೆಯಾಗಿದೆ.</p>.<p>ಯರಜಂತಿ ಗ್ರಾಮದ ಹನುಮಂತಿ ಬಸಯ್ಯ ಎನ್ನುವ ರೈತ ಮಹಿಳೆಯ ಮನೆಯ ತಗಡಿನ ಟಿನ್ಗಳು ಗಾಳಿಗೆ ಹಾರಿ ಹೋಗಿವೆ. ಇದರಿಂದ ಮನೆಯಲ್ಲಿ ಇದ್ದ ಜೋಳ, ಸಜ್ಜೆ ಮಳೆಗೆ ಸಿಲುಕಿ ₹ 75 ಸಾವಿರ ಮೌಲ್ಯದ ದವಸ ಧ್ಯಾನ್ಯಗಳು ಹಾಳಾಗಿವೆ ಎಂದು ಹನುಮಂತಿ ಅಲವತ್ತುಕೊಂಡರು.</p>.<p>ಆಲಿಕಲ್ಲು ಮಳೆಗೆ, ಲಕ್ಷ್ಮಿ, ವೆಂಕಟೇಶ, ದೇವಮ್ಮ ವೆಂಕಟೇಶ, ಹನುಮಂತಿ ಅವರಿಗೆ ಗಾಯವಾಗಿದ್ದು ಗುರುಗುಂಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಗ್ರಾಮಸ್ಧರು ತಿಳಿಸಿದ್ದಾರೆ.</p>.<p>ಮಳೆಗೆ ಹಾನಿಯಾದ ಸ್ಧಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ರೈತ ಮಹಿಳೆಗೆ ಪರಿಹಾರ ಒದಗಿಸಿಕೊಡಬೇಕೆಂದು ಗ್ರಾಮಸ್ಧರು ಒತ್ತಾಯ ಮಾಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260430-32-192683416</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>