ಸಿಂಧನೂರು ತಾಲ್ಲೂಕಿನ ಎಲೆಕುಡಲಿಕ್ಯಾಂಪ್ ನಿವಾಸಿ ಮಲ್ಲಣ್ಣ ನವಲಿ ಅವರು ಬೆಂಗಳೂರಿನಲ್ಲಿ ಎಂಎಸ್ಸಿ ಇನ್ ಯೋಗ ಮುಗಿಸಿದ್ದಾರೆ. 26 ವರ್ಷದ ಯುವಕ ಮಲ್ಲಣ್ಣ ಅವರು ಯಲಹಂಕದಲ್ಲಿ ವಿಶ್ವಭಾರತಿ ಫೌಂಡೇಷನ್ ಆರಂಭಿಸಿ, ಯೋಗ ತರಬೇತಿ ನೀಡುತ್ತಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಸಿಂಧನೂರಿಗೆ ಹಿಂತಿರುಗಿದ್ದು, ಇತ್ತೀಚೆಗೆ ಕೋವಿಡ್ ಸೆಂಟರ್ ಯೋಗ ಹೇಳಿಕೊಡುವ ಸೇವೆ ಪ್ರಾರಂಭಿಸಿ ಗಮನ ಸೆಳೆಯುತ್ತಿದ್ದಾರೆ.