ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದಿರುವ ರಾಜ್ಯದ ಎಲ್ಲ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಶಿಷ್ಯವೇತನ ಹಂಚಲಾಗುವುದು. ಅರ್ಹ ಬ್ರಾಹ್ಮಣರಿಗೆ ಕಡಿಮೆ ವೆಚ್ಚದ ಮನೆಗಳು, ವೈದ್ಯಕೀಯ ಸಹಾಯ, ಪ್ರತಿ ಜಿಲ್ಲೆಯಲ್ಲೂ ಸಹಾಯ ಕೇಂದ್ರ, ನಿರ್ಗತಿಕ ಬ್ರಾಹ್ಮಣರ ಅಂತ್ಯಕ್ರಿಯೆಗೆ ನೆರವು ಸೇರಿ ಸರ್ವತೋಮುಖ ಅಭಿವೃದ್ಧಿಗಾಗಿ ಮಂಡಳಿಯು ಯೋಜನೆ ರೂಪಿಸಿದೆ ಎಂದು ಹೇಳಿದರು.