ನವದೆಹಲಿ: ಇತಿಹಾಸದಲ್ಲಿರುವ ‘ಉತ್ಪ್ರೇಕ್ಷೆ’ಗಳನ್ನು ಕಾಲಕಾಲಕ್ಕೆ ತೆಗೆದು ಹಾಕುವ ಅಗತ್ಯವಿದೆ’ ಎಂದು ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿನ (ಐಸಿಎಚ್ಆರ್) ಅಧ್ಯಕ್ಷ ಅರವಿಂದ ಜಮಖೇಡ್ಕರ್ ಹೇಳಿದರು.
ಇತಿಹಾಸವನ್ನು ಪುನಃ ಬರೆಯವ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಇತಿಹಾಸ ಹೀಗೇ ಇರಬೇಕು ಎಂದು ಐಸಿಎಚ್ಆರ್ ನಿರ್ದೇಶಿಸುವುದಿಲ್ಲ. ಆದರೆ, ಇತಿಹಾಸವನ್ನು ಪುನಃ ಬರೆಯಲು ಹಾಗೂ ಸಂಶೋಧನೆಗೆ ಉತ್ತೇಜನ ನೀಡುತ್ತದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು.