ಈ ಬಾರಿ ಜೂನ್ನಿಂದ ಪ್ರಾರಂಭವಾಗಿರುವ ಮಳೆ ಇದುವರೆಗೂ ಬಿಟ್ಟಿಲ್ಲ. ಇದರಿಂದ ಕಟಾವಿಗೆ ಬಂದಿರುವ ಜೋಳದ ಬೆಳೆಗೆ ತೊಂದರೆಯಾದರೆ, ಭತ್ತದ ತೆನೆಯಲ್ಲಿನ ಹೂವು ಉದುರುತ್ತವೆ. ರಭಸವಾಗಿ ಮಳೆ ಸುರಿಯುತ್ತಿರುವುದರಿಂದ ಕಾಳು ಗಟ್ಟಿಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆ ನಿರಂತರವಾಗಿ ಬೀಳುತ್ತಿರುವುದರಿಂದ ಸಮೃದ್ಧ ಬೆಳೆ ಬರುವುದು ಕಷ್ಟ ಎಂಬುದು ರೈತರು ಆತಂಕ.