ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು ವಿರುದ್ಧ ಮಂಗಳವಾರ ಅನಿತಾ ಕುಮಾರಸ್ವಾಮಿ ಒಡೆತನದ ಕಸ್ತೂರಿ ಸುದ್ದಿವಾಹಿನಿಯು ನಕಾರಾತ್ಮಕ ಸುದ್ದಿಯನ್ನು ಬಿತ್ತರ ಮಾಡಿತ್ತು. ‘ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಸರು ಹೇಳಿಕೊಂಡು ಜಯಮುತ್ತು ಕ್ಷೇತ್ರದಲ್ಲಿ ಲೂಟಿಗೆ ಇಳಿದಿದ್ದಾನೆ. ಎಲ್ಲೋ ಬಿದ್ದವನನ್ನು ಕರೆದು ಎಚ್ಡಿಕೆ ಸ್ಥಾನ ಮಾನ ನೀಡಿದ್ದರು. ಈಗ ಅದೇ ವ್ಯಕ್ತಿ ದೇವೇಗೌಡರ ಕುಟುಂಬದ ವಿರುದ್ಧವೇ ತಿರುಗಿ ಬಿದ್ದಿದ್ದಾನೆ. ಇವನನ್ನು ಕೇಳಿ ಚನ್ನಪಟ್ಟಣದಲ್ಲಿ ಅಭಿವೃದ್ಧಿ ಮಾಡಬೇಕಂತೆ. ಈತನೊಬ್ಬ ಘೋಮುಖ ವ್ಯಾಘ್ರ. ಕಳೆದ ಚುನಾವಣೆಯಲ್ಲಿ ಟಿಕೆಟ್ ನೀಡದ್ದಕ್ಕೆ ಪ್ರತಿಯಾಗಿ ಸಂಚು ರೂಪಿಸಿದ್ದಾನೆ’ ಎಂದು ವಾಹಿನಿಯಲ್ಲಿ ಸುದ್ದಿ ಪ್ರಸಾರ ಆಗಿತ್ತು.