ರಾಮನಗರ: ಶಿವಕುಮಾರ ಶ್ರೀಗಳ ಗೌರವಾರ್ಥ ರಾಮನಗರದ ಎಂ.ಜಿ. ರಸ್ತೆಯ ವ್ಯಾಪಾರಸ್ಥರು ಮಂಗಳವಾರ ಅಂಗಡಿಗಳನ್ನು ಮುಚ್ಚಿ ಗೌರವ ಸೂಚಿಸಿದರು. ಶ್ರೀಗಳ ತವರು ಮಾಗಡಿ ತಾಲ್ಲೂಕಿನಲ್ಲೂ ಸ್ವಯಂಘೋಷಿತ ಬಂದ್ ಆಚರಿಸಲಾಯಿತು.
ರಾಮನಗರದಲ್ಲಿ ಲಿಂಗಾಯತ ವೀರಶೈವ ಸಂಘ ಹಾಗೂ ಶ್ರೀಗಳ ಅಭಿಮಾನಿಗಳು ನಗರದ ಪ್ರಮುಖ ಬೀದಿಗಳಲ್ಲಿ ಶಿವಕುಮಾರ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಸಿದರು.
ರಾಮನಗರದಲ್ಲಿ ಭಕ್ತರು ಮೆರವಣಿಗೆ ನಡೆಸಿದರು
ರಾಮನಗರದಲ್ಲಿ ಬಿಕೋ ಎನ್ನುವ ವಾತಾವರಣ ಇತ್ತು
ರಾಮನಗರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು