ಈ ಮೂಲಕ ಮುಖ್ಯಮಂತ್ರಿ ಪದಚ್ಯುತಿ ಇಲ್ಲವೇ ರಾಜೀನಾಮೆ ಸಾಧ್ಯತೆ ಕುರಿತು ಜೆಡಿಎಸ್ ಮುಖಂಡರಿಗೆ ಮೊದಲೇ ಖಾತ್ರಿಯಾಗಿದೆಯೇ ಎಂಬ ಅನುಮಾನ ಮೂಡಿದೆ. ಪ್ರತಿ ವರ್ಷ ಹಬ್ಬಕ್ಕೆ ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗಿದೆ. ಕುಮಾರಸ್ವಾಮಿ ಅವರು ತಪ್ಪದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಅಂತೆಯೇ ಕಾರ್ಯಕರ್ತರು ಹಬ್ಬಕ್ಕೆ ಫ್ಲೆಕ್ಸ್ಗಳನ್ನು ಅಳವಡಿಸುತ್ತಾ ಬಂದಿದ್ದಾರೆ. ಕಳೆದ ವರ್ಷ ಅಳವಡಿಸಿದ್ದ ಫ್ಲೆಕ್ಸ್ಗಳಲ್ಲಿ ಕುಮಾರಸ್ವಾಮಿ ಹೆಸರಿನ ಹಿಂದೆ ಮುಖ್ಯಮಂತ್ರಿ ಎಂಬ ಪದ ಇತ್ತು. ಆದರೆ ಈ ಬಾರಿ ಅದ್ಯಾಕೋ ಆ ಪದವನ್ನು ಮರೆಮಾಚಲಾಗಿದೆ.