ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷದಿಂದ ಕಣಕ್ಕೆ ಇಳಿದಿದ್ದ ಕಾರಣಕ್ಕೆ ಎಂ. ಮಂಜುನಾಥ್ ಮೇಲೆ ನಿರೀಕ್ಷೆ ಇತ್ತು. ಆದರೆ ಅವರೂ ಹತ್ತು ಸಾವಿರ ಗಡಿಯೊಳಗೇ ಇದ್ದಾರೆ. ಎಡಪಂಥೀಯ ವಿಚಾರಧಾರೆಯುಳ್ಳ ಸೋಷಿಯಲಿಸ್ಟ್ ಯನಿಟಿ ಸೆಂಟರ್ ಆಫ್ ಇಂಡಿಯಾದ ಟಿ.ಸಿ. ರಮಾ ಕ್ಷೇತ್ರದ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದು, ವ್ಯಾಪಕ ಪ್ರಚಾರವನ್ನೂ ನಡೆಸಿದ್ದರು. ಆದರೆ ಅವರೂ ಮತದಾರರನ್ನು ಸೆಳೆಯಲು ವಿಫಲರಾಗಿದ್ದಾರೆ. ಪಕ್ಷೇತರರಾದ ಪ್ರಕಾಶ್ ಅಲ್ಪ ಮತದಾರರ ಗಮನ ಸೆಳೆದಿದ್ದಾರೆ. ಉಳಿದೆಲ್ಲ ಅಭ್ಯರ್ಥಿಗಳ ಮತ ಎಣಿಕೆ ಸಾಮರ್ಥ್ಯವು 2–3 ಸಾವಿರ ಒಳಗೆ ಸೀಮಿತಗೊಂಡಿದೆ.