ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಬ್ರಹ್ಮಿಣಿಪುರ ಗ್ರಾಮದ ಕೆರೆಯಲ್ಲಿ ಸೋಮವಾರ ಈಜಲು ಹೋಗಿದ್ದ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದರು.
ಬ್ರಹ್ಮಿಣಿಪುರದ ನವನೀತ್ (12) ಹಾಗೂ ತಗಚಗೆರೆ ಗ್ರಾಮದ ಗಗನ್ (14) ಮೃತರು. ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದರು. ಸ್ಥಳದಲ್ಲಿ ಬಾಲಕರ ಸಂಬಂಧಿಕರ ಆಕ್ರಂದನ ಮನ ಕಲಕುವಂತೆ ಇತ್ತು.