ನೀಲಕಂಠೇಶ್ವರ 27ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಕೃಷ್ಣಶೆಟ್ಟಿ ನೀಡಿದ್ದ ಬಿ ಫಾರಂನಲ್ಲಿ ವಾರ್ಡ್ ಮತ್ತು ಹೆಸರು ತಪ್ಪಾಗಿದ್ದರಿಂದ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಈ ವಾರ್ಡಿನಲ್ಲಿ ಕಾಂಗ್ರೆಸ್ ನ ಎನ್.ಮೋಹನ್ ಮತ್ತು ಕೃಷ್ಣಶೆಟ್ಟಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಕೃಷ್ಣಶೆಟ್ಟಿ ನಾಮಪತ್ರ ತಿರಸ್ಕೃತಗೊಂಡ ಕಾರಣ ಎನ್.ಮೋಹನ್ ಅವಿರೋಧವಾಗಿ ಆಯ್ಕೆಯಾದಂತಾಗಿದೆ.