ಜಿಲ್ಲಾಧಿಕಾರಿ ಭವನದಲ್ಲಿನ ಚುನಾವಣಾ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ. ರಾಜೇಂದ್ರ ನೇತೃತ್ವದಲ್ಲಿ ಬುಧವಾರ ನಾಮಪತ್ರ ಪರಿಶೀಲನೆ ಕಾರ್ಯವು ನಡೆಯಿತು. ಯೂಥ್ ಇಂಡಿಯಾ ಪೀಸ್ ಪಾರ್ಟಿಯ ಕೆ.ಎಸ್. ವೇಣುಗೋಪಾಲ್, ಪಕ್ಷೇತರರಾದ ಎಸ್.ಇ. ಮಲ್ಲಿಕಾರ್ಜುನ್ ಹಾಗೂ ಶಿವಣ್ಣ ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತಗೊಂಡವು.