ಸರ್ಕಲ್ ಇನ್ಸ್ಪೆಕ್ಟರ್ ಟಿ.ಟಿ. ಕೃಷ್ಣ ನೇತೃತ್ವದಲ್ಲಿ ಎಸ್ಐಗಳಾದ ಅನಂತ್ರಾಮ್, ಜಿ.ಎಂ. ನವೀನ್, ಲಕ್ಷ್ಮಣ್ಗೌಡ, ರವಿಕುಮಾರ್, ಭಗವಾನ್ ತಮ್ಮ ಠಾಣೆಗಳ ಸರಹದ್ದಿನಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ಒಳಬರುವ ವಾಹನಗಳನ್ನು ಜಪ್ತಿ ಮಾಡಿದರು. ಅನುಮತಿ ಪತ್ರವಿದ್ದರೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿದರು. ಅನುಮತಿ ಪತ್ರವಿಲ್ಲದವರ ವಾಹನಗಳನ್ನು ಸೀಜ್ ಮಾಡಿ ವಾಹನ ಸವಾರರನ್ನು ವಾಪಸ್ ಕಳುಹಿಸಿದರು. ಕನಕಪುರ ತಾಲ್ಲೂಕು ತಮಿಳುನಾಡು ಗಡಿ ಪ್ರದೇಶವಾಗಿದೆ. ತಮಿಳುನಾಡು ಕಡೆಯಿಂದ ಬರುವುದು ಮತ್ತು ಹೋಗುವುದು ಹೆಚ್ಚಾಗಿರುವುದರಿಂದ ತಹಶೀಲ್ದಾರ್ ವಿ.ಆರ್. ವಿಶ್ವನಾಥ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಟಿ.ಟಿ. ಕೃಷ್ಣ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.