ದೆಹಲಿಯಲ್ಲಿ ನಡೆದ ತಬ್ಲಿಬಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಈ ವ್ಯಕ್ತಿ ಬಳಿಕ ಹೊಸಕೋಟೆಗೆ ವಾಪಸ್ ಆಗಿದ್ದರು. ತರುವಾಯ ಚನ್ನಪಟ್ಟಣದಲ್ಲಿ ಇರುವ ತನ್ನ ಬಂಧುಗಳ ಮನೆಗೂ ಬಂದಿದ್ದು, ಇಲ್ಲಿಯೇ ಒಂದೂವರೆ ದಿನ ತಂಗಿದ್ದರು ಎನ್ನಲಾಗಿದೆ. ಆ ವ್ಯಕ್ತಿಗೆ ಸೋಂಕು ಇರುವುದು ಖಾತ್ರಿಯಾಗುತ್ತಿದ್ದಂತೆ ಅವರ ಓಡಾಟದ ವಿವರಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕಲೆ ಹಾಕಿದ್ದರು. ಈ ಸಂದರ್ಭ ಅವರು ಚನ್ನಪಟ್ಟಣಕ್ಕೂ ಭೇಟಿ ನೀಡಿರುವುದು ಪತ್ತೆಯಾಯಿತು.