ಗುಡ್ಡಹಳ್ಳಿಯಲ್ಲಿ ಸೋಂಕಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಣ್ಣ, ತಂಗಿ ಮತ್ತು ಎನ್ಇಎಸ್ ಬಡಾವಣೆಯಲ್ಲಿ ವ್ಯಕ್ತಿ, ಮೋಟಗೊಂಡನಹಳ್ಳಿ ವ್ಯಕ್ತಿ ಹಾಗೂ ಕರಗದಹಳ್ಳಿಯಲ್ಲಿ ಮಹಿಳೆ ಬಲಿಯಾಗಿದ್ದಾರೆ. ನಿತ್ಯ ಕೋವಿಡ್ ಸೋಂಕು ಹರಡುವುದು ಜಾಸ್ತಿಯಾಗುತ್ತಿದ್ದರೂ ಪಟ್ಟಣದಲ್ಲಿ ಜನರು ಬೇಕಾಬಿಟ್ಟಿಯಾಗಿ ಅಲೆದಾಡುವುದು ನಿಂತಿಲ್ಲ. ಜನಸಾಮಾನ್ಯರು ಸ್ವಯಂಪ್ರೇರಣೆಯಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕಿದೆ.