ಚನ್ನಪಟ್ಟಣ 35, ಕನಕಪುರ 11, ಮಾಗಡಿ 20 ಮತ್ತು ರಾಮನಗರ 30 ಪ್ರಕರಣಗಳು ಇದರಲ್ಲಿ ಸೇರಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 3543ಕ್ಕೆ ಏರಿಕೆ ಆಗಿದೆ. ಈ ಪೈಕಿ ಚನ್ನಪಟ್ಟಣ 865, ಕನಕಪುರ 750, ಮಾಗಡಿ 507 ಮತ್ತು ರಾಮನಗರ 1421 ಪ್ರಕರಣಗಳು ಸೇರಿವೆ. ಕನಕಪುರ ತಾಲ್ಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿನಿಂದಾಗಿ ಈವರೆಗೆ ಜಿಲ್ಲೆಯಲ್ಲಿ 43 ಮಂದಿ ನಿಧನರಾಗಿದ್ದಾರೆ.